ಜನ, ಮನಗಳನ್ನು ಕೊಲ್ಲುವ ಜೈವಿಕ ಶಸ್ತ್ರಾಸ್ತ್ರಗಳು

ಜನ, ಮನಗಳನ್ನು ಕೊಲ್ಲುವ ಜೈವಿಕ ಶಸ್ತ್ರಾಸ್ತ್ರಗಳು

‘ಯುದ್ಧ’ವೆಂದರೆ ಭೀಕರವಾದದ್ದು ರಕ್ತಪಾತ, ಹೆಣಗಳ ರಾಶಿ, ರಣರಂಗ, ಗುಂಡುಗಳ ಸಿಡಿಮದ್ದು! ಹೀಗೆ ಹಿಂಸಾತ್ಮಕ ಕ್ರಿಯಾಪರ್ವ ಕೇವಲ ಜನರನ್ನು ಸಾಯಿಸಿ ನೆಲವನ್ನು ಜಯಿಸಿ ಅನುಭೋಗಿಸುವ ವ್ಯವಸ್ಥೆ ಕೆಲವು ಕಾಲವಿತ್ತು. ಈಗಂತೂ ಅಣ್ವಸ್ತ್ರಗಳು, ರಾಸಾಯನಿಕ ಅಸ್ತ್ರಗಳು, ಜೈವಿಕ ಅಸ್ತ್ರಗಳನ್ನು ಯತೇಚ್ಛವಾಗಿ ಗುಪ್ತಗಾಮಿನಿಯಾಗಿ ತಯಾರಿಸುತ್ತ ಶತೃರಾಷ್ಟ್ರಗಳ ನೆಲ, ಜಲವನ್ನು ಜನಮನವನ್ನೂ ಧ್ವಂಸಗೊಳಿಸಲಾಗುತ್ತದೆ. ಮುಂದೆಂದೂ ಸಹ ಈ ನೆಲದಲ್ಲಿ ಜೀವಕೋಶಗಳೇ ಸೃಷ್ಟಿಯಾಗದಂತೆ ಮಾಡಲಾಗುತ್ತದೆ. ಕೇವಲ ಜನವನ್ನು ಆಕ್ರಮಿಸಿ ಉಳಿದ ಜನರನ್ನೂ, ಭೂಮಿಯನ್ನೂ ಅನುಭವಿಸುವುದರ ಬದಲು ನಿರಂತರವಾಗಿ ಜೀವಕಳೆಯೇ ಈ ಸ್ಥಳದಲ್ಲಿ ಅಂಕುರಿಸದಂತೆ ಮಾಡಲಾಗುತ್ತದೆ. ಇವುಗಳಿಗೆ ಸಮೂಹ ನಾಶದ ಅಸ್ತ್ರಗಳೆಂದೇ ಕರೆಯಲಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ರಾಸಾಯನಿಕ ಅಸ್ತ್ರಗಳು, ನ್ಯೂಕ್ಲಿಯರ್ ಮತ್ತು ಜೈವಿಕ (ಕೆಮಿಕಲ್, ನ್ಯೂಕ್ಲಿಯರ್, ಬಯಲಾಜಿಕಲ್) ಅಸ್ತ್ರಗಳೆಂದು ವಿಭಾಗಿಸಲಾಗಿದೆ.

ರಾಸಾಯನಿಕ ಅಸ್ತ್ರಗಳು: ಈ ಅಸ್ತ್ರಗಳು ದ್ರವರೂಪದಲ್ಲಿರುತ್ತವೆ. ಈ ರಾಸಾಯನಿಕ ದ್ರವವನ್ನು ಶತೃಪ್ರದೇಶದ ಮೇಲೆ ಸಿಂಪಡಿಸುವುದು, ಅಥವಾ ಗಾಳಿ ಬೀಸುವ ದಿಕ್ಕನ್ನು ಆಧರಿಸಿ ದ್ರವವನ್ನು ಶತೃ ಪ್ರದೇಶದ ಮೇಲೆ ಚೆಲ್ಲಲಾಗುತ್ತದೆ. ಈ ದ್ರವವು ನಿಧಾನವಾಗಿ ಆವಿಯಾಗಿ ಪರಿವರ್ತನೆ ಹೊಂದಿ ಗಾಳಿಯಲ್ಲಿ ಮಿಶ್ರವಾಗಿ ಆ ಗಾಳಿಯನ್ನು ಸೇವಿಸಿದ ಜನಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ರೀತಿಯ ರಾಸಾಯನಿಕ ಅಸ್ತ್ರಗಳಿಂದ ರಕ್ಷಣೆ ಪಡೆಯಲು ಜನ ಅನಿಲ ಮುಖವಾಡಗಳನ್ನು ಕಂಡು ಹಿಡಿದರು. ಅನಿಲದ ಮುಖವಾಡವು ಕೇವಲ ಉಸಿರಾಟದಲ್ಲಿ ರಕ್ಷಣೆ ನೀಡಬಲ್ಲದು ಎಂಬುದನ್ನು ಕಂಡುಕೊಂಡ ವಿಜ್ಞಾನಿಗಳು ಚರ್ಮದ ಮೇಲೆ ತೀಕ್ಷ್ಣ ಪರಿಣಾಮ ಉಂಟುಮಾಡಬಲ್ಲ ರಾಸಾಯನಿಕ ಅನಿಲಗಳನ್ನು ಸೃಷ್ಟಿಸಲಾರಂಭಿಸಿದರು. ಅವುಗಳಲ್ಲಿ ಮೊದಲು ಬಂದದ್ದು ಮಸ್ಟರ್ಡ್‌ಗ್ಯಾಸ್ (ಸಾಸುವೆ ಅನಿಲ). ಇದು ಚರ್ಮದ ಒಳಸೇರಿ ಮಾಂಸದಲ್ಲಿ ಇಳಿಯುತ್ತದೆ. ನಂತರ ಹುಣ್ಣುಗಳಾಗಿ ಬೊಕ್ಕೆಗಳು ಏಳುತ್ತವೆ. ಇನ್ನೂ ಈ ಗಾಳಿಯಿಂದ ಕೆಲವೇ ಸೆಕೆಂಡುಗಳಲ್ಲಿ ಸಾವು ತರಬಹುದಾದ ಸರಿನ್, ಟಾಬೂನ್ ಎಂಬ ಅನಿಲಗಳನ್ನು ಕಂಡು ಹಿಡಿಯಲಾಗಿದೆ. ಈ ಅನಿಲಗಳನ್ನು ಫಿರಂಗಿಗಳ ಮೂಲಕ ಅಥವಾ ವಿಮಾನಗಳ ಮೂಲಕ ಶತೃಸೈನ್ಯ ಅಥವಾ ಜನ ಇರುವ ಭೂಮಿಯ ಮೇಲೆ ಹಾಕಬಹುದು. ಇದರಿಂದಾಗುವ ದುಷ್ಪರಿಣಾಮಗಳನ್ನು ಅರಿತು ನಿಷೇಧಿಸಲಾಯಿತು. ಆದಾಗ್ಯೂ ಕೆಲವು ರಾಷ್ಟ್ರಗಳು ರಹಸ್ಯವಾಗಿ ಇಂತಹ ಅಸ್ತ್ರಗಳನ್ನು ಉತ್ಪಾದಿಸುತ್ತಲಿವೆ ಎಂಬ ವರದಿ ಇದೆ. ರಶಿಯಾ, ಅಮೇರಿಕಾ, ಇರಾಕ್ ದೇಶಗಳು ಇಂತಹ ಅನಿಲಗಳನ್ನು ಹೊಂದಿದ್ದ ಬಗ್ಗೆ ಅವೇ ಖಾತ್ರಿ ಪಡಿಸಿವೆ. ಆದಾಗ್ಯೂ ಇಂತಹ ಅಸ್ತ್ರಗಳನ್ನು ಬಳಸುವುದು ಕಠಿಣವಾಗಿದೆ.

ಜೈವಿಕ ಅಸ್ತ್ರಗಳು: ಅಣು ವಿಕಿರಣ ಅಸ್ತ್ರಗಳಷ್ಟೇ ಭೀಕರವಾದ ಮತ್ತೊಂದು ಅಸ್ತ್ರವೇ ಜೈವಿಕ ಅಸ್ತ್ರ. ಮಾನವ ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡಿ ಅದನ್ನು ನಾಶ ಮಾಡಬಲ್ಲ ಜೈವಿಕ ವೈರಸ್‌ಗಳಿಂದಾದ ಅಸ್ತ್ರ ಇದಾಗಿದೆ. ಈ ರೀತಿಯ ಜೈವಿಕ ಅಸ್ತ್ರಗೆಳಲ್ಲಿ ‘ಅಂತ್ರಾಕ್ಸ್’ ಕಾಯಿಲೆ ತರಬಲ್ಲ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಉಸಿರಾಟದ ಮೂಲಕ ಮಾನವನ ದೇಹವನ್ನು ಪ್ರವೇಶಿಸುವ ವೈರಸ್ ಕೆಲವು ದಿನಗಳವರೆಗೆ ಯಾವುದೇ ರೀತಿಯ ಅಪಾಯದ ಸೂಚನೆಯನ್ನು ನೀಡಲಾರವು. ಆದರೆ ಕೆಲವು ದಿನಗಳ ನಂತರ, ಇದರ ದುಪ್ಪರಿಣಾಮಗಳು ಗೋಚರಿಸಲಾರಂಭಿಸುತ್ತವೆ. ಮೊದಲ ಹಂತದಲ್ಲಿ ಫ್ಲೂ ನಂತರ ಕೆಮ್ಮು, ಸಣ್ಣದಾಗಿ ಎದೆನೋವು ಕಾಣಿಸಿಕೊಳ್ಳುತ್ತದೆ. ನಂತರ ತೀವ್ರವಾದ ಉಸಿರಾಟದ ಸಮಸ್ಯೆ ಉಂಟಾಗಿ ಕೊನೆಗೆ ೩೦ ದಿನಗಳೊಳಗಾಗಿ ಸಾವು ನಿಶ್ಚಿತವಾಗಿ ಬಿಡುತ್ತದೆ.

ನ್ಯೂಕ್ಲಿಯರ್ ಅಣ್ವಸ್ತ್ರಗಳು : ಈ ಅಣ್ವಸ್ತ್ರದ ಅಪಾಯ ಭೀಕರವಾದುದು ಎಂದು ಹೇಳಬಹುದು. ಈ ಅಸ್ತ್ರಗಳನ್ನು ಸಿಡಿಸಿದಾಗ ಹೊಮ್ಮುವ ಕಿರಣಗಳು ಮಾನವ ದೇಹದ ಅಸ್ತಿಮಜ್ಜೆಯ ನೆಲೆಗಳನ್ನು ನಾಶಗೊಳಿಸುತ್ತದೆ. ಇವುಗಳ ದೊಡ್ಡತೊಂದರೆ ಎಂದರೆ ಈ ಆಸ್ತ್ರಗಳು ವರ್ಷಗಟ್ಟಲೆ ತಮ್ಮ ಭೀಕರ ಪರಿಣಾಮವನ್ನು ಬೀರುತ್ತಲೇ ಇರುತ್ತವೆ. ಅತ್ಯಂತ ಭಯಾನಕಗಳ ಅಸ್ತ್ರಗಳ ಸಾಲಿನಲ್ಲಿ ಬೋಟುಲಿಸಂ ಕಾರಣ, ಕಾಂಗೋ- ಕ್ರಿಮೀನ್ ವೈರಸ್, ಎಬೋಲಾ, ಹಾಂಟಾ ವೈರಸ್, ಲಾಪ್ಪಾ, ರಿಪ್‌ವ್ಯಾಲಿ ವೈರಸ್, ಎಂಬ ವಿನಾಶಕಾರಿ ಅಸ್ತ್ರಗಳು ತುಂಬಿವೆ. ಈ ಎಲ್ಲ ವೈರಸ್‌ಗಳ ವಿಶೇಷವೆಂದರೆ ಇವುಗಳ ಗಾತ್ರ ಇವು ೫ ಮೆಕ್ರಾನ್‌ಗಿಂತಲೂ ಕಡಿಮೆ ಗಾತ್ರ ಹೊಂದಿದ್ದು ಗಾಳಿಯಲ್ಲಿ ಬಹಳಷ್ಟು ಕಾಲ ತೇಲಾಡಿಕೊಂಡಿರಬಲ್ಲವು. ಈ ಪ್ರದೇಶದಲ್ಲಿ ಓಡಾಡುತ್ತಿರುವ ಏನರಿಯದ ವ್ಯಕ್ತಿಗಳು ಈ ಗಾಳಿಯನ್ನು ಸೇವಿಸಿದಲ್ಲಿ ಈ ವೈರಸ್‌ಗಳು ಅವರ ದೇಹದಲ್ಲಿ ಪ್ರವೇಶಿಸಿ ಆಘಾತವನ್ನುಂಟು ಮಾಡುತ್ತವೆ. ಮಾತ್ರವಲ್ಲ ಮಾನವನ ಉಸಿರಾಟದ ರಕ್ಷಣಾ ವಿಧಾನಗಳಿಂದ ತಪ್ಪಿಸಿಕೊಂಡು ಶ್ವಾಸಕೋಶವನ್ನು ಪ್ರವೇಶಿಸುತ್ತವೆ. ನಂತರ ರಕ್ತನಾಳಗಳಿಗೆ ಈ ವೈರಸ್‌ಗಳು ಸೇರಿಕೊಳ್ಳುತ್ತವೆ. ಹೀಗಾದಾಗ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೇ ಉಸಿರಾಟ ನಡೆಸಿ ತೊಂದರೆಗೀಡಾಗಿ ಮೃತ್ಯುವನ್ನು ಅಪ್ಪುತ್ತಾರೆ.

ರಕ್ಷಣಾ ಯೋಜನೆಗಳು : ಈ ಭೀಕರ ಅಸ್ತ್ರಗಳ ವೈರಸ್‌ಗಳಿಂದ ತಪ್ಪಿಸಿಕೊಳ್ಳಲು ವಿಜ್ಞಾನಿಗಳು ಸತತವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸರಕಾರ ಮತ್ತು ರಾಸಾಯನಿಕ ಕಂಪನಿಗಳು ಮತ್ತು ಜೀವ ವಿಜ್ಞಾನ ಸಂಸ್ಥೆಗಳ ನಡುವೆ ಹೆಚ್ಚು ನಿಕಟ ಸಂಪರ್ಕವನ್ನುಂಟು ಮಾಡಬೇಕಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಈ ರೀತಿಯ ವೈರಸ್‌ಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಿಗಳನ್ನು ತಯಾರಿಸಿ ದೇಶದಾದ್ಯಂತ ಆಸ್ಪತ್ರೆಗಳಿಗೆ ತರಿಸಬೇಕಿದೆ. ಈ ಮೂರು ಕಾರಣಗಳು ಯಶಸ್ವಿಯಾದರೆ ವಿಜ್ಞಾನದಿಂದ ಕಹಿಯಾಗುವ ಬದಲು ಸ್ವಲ್ಪಾದರೂ ಸಿಹಿ ಉಣಿಸಬಹುದಾಗಿದೆ. ವಿಜ್ಞಾನವನ್ನು ಮನುಷ್ಯನ ಶಾಂತಿ ನೆಮ್ಮದಿ ಸಮಬಾಳ್ವೆಗಳಿಗೆ ವಿನಿಯೋಗಿಸಬೇಕೇ ಹೊರತು ಇಂಥಹ ಭೀಕರ ಅಸ್ತ್ರಗಳನ್ನು ತಯಾರಿಸಿ ಜನರನ್ನು ಕೊಲ್ಲುವುದು ಅಲ್ಲ. ಅದಕ್ಕೆ ಮಿತಿಯೊಳಗೆ ಅಪಾಯವಾಗದಂತೆ ವಿಜ್ಞಾನವನ್ನು ಎಲ್ಲ ರಾಷ್ಟ್ರಗಳು ಉಪಯೋಗವನ್ನು ಪಡೆದುಕೊಳ್ಳಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಪ್ಪೀ ಮನವಂಜೆ ಜನಕೇನು ಪೇಳುವುದು ?
Next post ಬದುಕು ಇದು ಹೀಗೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys